Sunday, January 17, 2010

ಕವನವಂತೆ Part VI

.....................................................
ಕಾರಣ
....................................................

ಪರಿಸ್ಥಿತಿ!!!!!

ಕವನವಂತೆ Part V

.........................................................................
ಸತ್ಯ
.........................................................................

"ತಪ್ಪು"!  ಅದು ನಿನ್ನಿಂದಲೇ ಎಂದು ಎಲ್ಲರಿಗೂ ಖಾತ್ರಿಯಾದಾಗ!!

ಕವನವಂತೆ Part IV

..............................................................
ಆತ್ಮ
..............................................................

ನನ್ನಲ್ಲಿದ್ದಾಗ,
ಈ ದೇಹ
                       ಚೇತನ
ಇಲ್ಲವಾದರೆ,
ಈ ದೇಹ
                         ಜಡ
..............................................................

Sunday, January 3, 2010

ಕವನವಂತೆ Part III

........................................................
ಪ್ರಸ್ತುತ

ಬೆಳೆ
ಬೆಳೆದರೆ
ಬೆಳವಣಿಗೆ!

ಕವನವಂತೆ Part II

...........................................................
ಬರ ಪರಿಹಾರ 

ಬರ ಪರಿಹಾರ
ಪರಿ ಪರಿಯಾಗಿ ಬೇಡಿ ಪಡೆದರೂ
ಬರಡಾಗಿದೆ ಪರಿಹಾರ

ಕವನವಂತೆ Part I

......................................................................
ನೆರಳು

ಬೆಳಗ್ಗೆಯಿಂದ ಮುಂದಿರುತ್ತಾಳೆ
ಮಧ್ಯೆ ಮರೆಯಾಗುತ್ತಾಳೆ
ಸಂಜೆ ಹಿ೦ಬಾಲಿಸುತ್ತಾಳೆ
ಕತ್ತಲಲ್ಲಿ ಒಂದಾಗುತ್ತಾಳೆ.

Thanks for these wonderful words


I Like These Words


"public gallery" picasa links to picz

Just click and go through the album to see all the photos:


road trip



banvasi



durga

Saturday, January 2, 2010

हुब्बल्ली

हुब्बल्ली मेहेज़ एक ज़रिया था बादामी और पटदकल पहूँचने के लिए! चित्रदुर्ग से रात १० बजे हम हुबली के लिए निकले थे! आखिर हुबली भी हमारे सामने ही गयी! ऐसे हुबली में हमारी कोई घूमने कि इरादा नहीं था! क्योंकि दोपहर को हमें बादामी, पटडकल और ऐहोले देख कर हुबली लौटना था!

फिर भी हुबली सर्कल का राणी चेन्नम्मा का पुतला और इदगा मैदान अच्चा लगा!




Madhu's friend Mr. Ajay arranged, in fact adjusted his room which was already jam packed to make room for 3 of us. By the time we reached Hubli it was almost 3:00 AM in the morning (23/12/2009)! The rickshaw driver demanded 70 bucks to drop us to Shirur Park from K.S.R.T.C bus stand! (actually it costs 40 bucks). However we reached the room. As we were fully exhausted we just slept off. Badami, Pattadkal, and Aihole were situated almost 60 to 70 KM away from Hubli, so we had to catch early bus to Badami.

Our camera was loaded with photos, so we thought of copying the photos to pen drive. As it was early morning digital photo studios were yet to open. So we just sought the help of a mobile shop technician to just copy the photos from camera's memory card to pen drive. The guy agreed to do that but he ended up formatting the memory card! He told there is no photo's in the memory card. We were stunned and in no man's land!! It was like "ನೀರಿನಲ್ಲಿ ಹೋಮ ಮಾಡಿದ ಹಾಗೆ" We just found a studio where the owner was happy to help us. He told that he will recover the deleted photos's for just 200 bucks. So we felt very relieved and asked him to do so. We bought a new memory card and off we went to Badami. We were late due to the unexpected memory card problem!!! All is well which ends well so we left all the worries of memory card and were eagerly looking forward to see Badami, Aihole and Pattadkal.

ಬಾದಾಮಿಯ ಸುಂದರ ಗುಹೆಗಳ ಒಳ ನೋಟ ಮುಂದಿನ ಪುಟದಲ್ಲಿ................

ಕವನವಂತೆ!!!

..................................................

ಸಾಲ

ನಿನ್ನಲ್ಲಿದ್ದರೆ,
ನನ್ನ ನೆನಪುಗಳನ್ನು ಸಾಲವಾಗಿ ಕೊಡುವೆಯಾ?

..........................................................................

ಕೋಪ

ಹೃದಯದಾಳ ತಿಳಿಯದೆ ಮನಸು ಮಾತನಾಡಿದರೆ


............................................................................

ಚಿತ್ರದುರ್ಗ

ಬೆಂಗಳೂರಿನಲ್ಲಿ ಎರಡು ದಿನಗಳನ್ನು ಸ್ನೇಹಿತರ ಜೊತೆ ಕಳೆದ ನಂತರ ಮುಂದಿನ ನಿಲುಗಡೆ ಚಿತ್ರದುರ್ಗ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ರೈಲು ಬಂಡಿಯ ಸಹಾಯ ಪಡೆಯುವುದು ಎಂದು ತೀರ್ಮಾನವಾಯಿತು. ಆದರೆ ಟಿಕೆಟ್ ಕಾದಿರಿಸುವ ವ್ಯವಸ್ತೆ ನಮ್ಮ ಅಮೂಲ್ಯ ಸಮಯವನ್ನು ತಿನ್ನುವ ಎಲ್ಲಾ ಲಕ್ಷಣಗಳು ಕಂಡು ಬಂದಾಗ ರೈಲು ಬಂಡಿಗೆ ಬೈ ಬೈ ಹೇಳಿ ಬಸ್ ಹತ್ತುವ ಸೂಕ್ತ ನಿರ್ಧಾರ ಕೈಗೊಂಡರು.

ಕತ್ತಲೆಯನ್ನು ಸೀಳಿ ಸಾಗಿದ ಕ.ರಾ.ರ.ಸಾ. ಸ೦. ಯ ರಾಜಹಂಸ ಬಸ್ ಚಿತ್ರದುರ್ಗ ತಲುಪಿದಾಗ ಅಪರಾತ್ರಿ!! ಮೊದಲೇ ಮಾಡಿಕೊಂಡ ವ್ಯವಸ್ತೆಯ ಪ್ರಕಾರ ನಮ್ಮ ದುರ್ಗದ ಗೆಳೆಯ ಪ್ರಶಾಂತ್ ತನ್ನ ಮನೆಯಲ್ಲಿ ನಮಗಾಗಿ ನಿದ್ದೆ ಬಿಟ್ಟು ಕಾಯುತ್ತಿದ್ದ. ಅತ್ತ ಬೆಳಕೂ ಇಲ್ಲದ ಇತ್ತ ಕತ್ತಲೆಯೂ ಅನ್ನಲಾಗದ ವಿಚಿತ್ರ ಸಮಯದಲ್ಲಿ ನಾವು ಅವನಿಗೆ ಫೋನ್ ಮಾಡಿ ನಾವು ಬಂದಿರುವುದನ್ನು ಅರುಹಿದೆವು. ರಿಕ್ಷಾ ಹಿಡಿದು, ಪ್ರಶಾಂತ್ ನೀಡಿದ ವಿಳಾಸದ ಜಾಡನ್ನು ಹಿಡಿದು ಕೊನೆಗೂ ಮನೆ ಸೇರಿದೆವು. ಸಮಯ ಮುಂಜಾನೆ ೩:೦೦, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಬೆಳಗ್ಗಿನ ದುರ್ಗಾರೋಹಣಕ್ಕೆ ಸಿದ್ದತೆ ಶುರು ಮಾಡಿದ್ದೊಂದು ನೆನಪು... ಆಮೇಲಿನ ದುರ್ಗದ ಕಲ್ಲಿನ ಕೋಟೆಯ ರಮಣೀಯ ದೃಶ್ಯಗಳ ಬೇಟೆ.... ಈಗ ನೆನಪುಗಳ ಮೂಟೆ!




ಚಿತ್ರದುರ್ಗದ ನಂತರ ಮೂರನೆಯ ಹೆಜ್ಜೆ ಹುಬ್ಬಳ್ಳಿ..............

Friday, January 1, 2010

ಮಂಗಳೂರಿನಿಂದ - ಮಂಗಳೂರಿಗೆ!


ಮಂಗಳೂರು - ಮಂಗಳೂರು (ನಡುವಿನ ಪ್ರವಾಸ ಕಥೆ) ೧೯-೧೨-2009

ಸರಿ ಸುಮಾರು ಎರಡು ತಿಂಗಳಿನಿಂದ ಅಂದು ಕೊಂಡಿದ್ದ ಪಯಣದ ಯೋಜನೆ ಕೊನೆಗೂ ಕಾರ್ಯ ಪ್ರವೃತ್ತವಾಗುವ ಹಂತ ತಲುಪಿತ್ತು, ಅದು ೧೯ ನೆಯ ತಾರೀಕು ಶನಿವಾರ ಎಂಟು ಗಂಟೆ ನಲವತ್ತು ನಿಮಿಷ ಮಂಗಳೂರಿನ ಪ್ರಧಾನ ರೈಲ್ವೆ ನಿಲ್ಧಾಣದಿಂದ ಹೊರಟ ಚುಕು ಬುಕು ರೈಲು ಗಾಡಿ, ಅರುಣ್, ಮಧು, ಹಾಗೂ ನಾಗೇ೦ದ್ರನನ್ನು ಹೊತ್ತು ಕೊಂಡು ತನ್ನ ಗಮ್ಯ ಸ್ಥಳವಾದ "ಯಶವಂತಪುರ ರೈಲು ನಿಲ್ಧಾಣ" ಇಲ್ಲಿಗೆ ಹೊರಟೇ ಬಿಟ್ಟಿತು! ಅರುಣ್

ಎರಡು ತಿಂಗಳ ಹಿಂದೆ :-

ಹೇಯ್ ನಾವೆಲ್ಲರೂ ಎಲ್ಲಾದರೂ ದೂರ ಹೋಗಿ ಬರೋಣವೇ? ಇಂತಹ ಒಂದು ಪ್ರಸ್ತಾವನೆ ಮುಂದಿಟ್ಟವನು "ಅರುಣ್" ಸರಿ ಹೋಗೋಣ ಎಂದವರು ಕನಿಷ್ಠ ೯ ಸ್ನೇಹಿತರು!!! ಆಯ್ತು ನೋಡಿ ಇಲ್ಲಿಂದ ಪ್ರವಾಸಿ ತಾಣಗಳ ಹುಡುಕಾಟ! ಕರ್ನಾಟಕದ ನಕ್ಷೆಯನ್ನು ಹಿಡಿದು ಎಲ್ಲಿಗೆಲ್ಲ ಸವಾರಿ ಬೆಳೆಸ ಬಹುದು ಎನ್ನುವುದರ ಬಗ್ಗೆ ದೀರ್ಘ ಚಿಂತನೆ. ಕೊನೆಗೂ ಒಂದು ಕರಡು ಪ್ರತಿ ಸಿದ್ದವಾಯ್ತು! ಬಹಳ ಉದ್ದವಾದ ಪಟ್ಟಿಯೇ ಸಿದ್ದವಾಗಿತ್ತು. ಮಂಗಳೂರಿನಿಂದ ಹೊರಟು ಮೈಸೂರು, ಬೆಂಗಳೂರು, ಹಂಪಿ, ಪಟ್ಟದಕಲ್ಲು, ಐಹೊಳೆ, ಬಾದಾಮಿ, ಬಿಜಾಪುರ್, ಬೆಳಗಾಂ, ಕುಮಟಾ, ಗೋಕರ್ಣ, ಓಂ ಬೀಚ್ ಕೊನೆಗೆ ಮನೆಗೆ!!!!

ಅರುಣ್, ನಾಗ, ಮಧು, ಬಿಟ್ಟಿ, ನಿತಿನ್, ಅಜ್ಜು, ಜೀವನ್, ವಿಜಯ ಚಂದ್ರ, ಶ್ರೀನಿಧಿ, ಅವಿನಾಶ್, ರವಿಯಣ್ಣ ಇಷ್ಟೊಂದು ಜನ ಹೊರಡೋದು ಎಂದು ತೀರ್ಮಾನವಾಯಿತು. ಅನಿವಾರ್ಯ ಕಾರಣಗಳಿಂದ ಕೊನೆಗೆ ಪಯಣಕ್ಕೆ ಹೆಜ್ಜೆ ಇಟ್ಟಿದ್ದು ಕೇವಲ ಮೂರೇ ಮೂರು ಜನ! ಅದೇನೇ ಇರಲಿ ಶನಿವಾರ ೧೯ನೆಯ ೨೦೦೯ರಂದು ದಂಡಯಾತ್ರೆ ಶುರುವಾಯಿತು.

ಮೂರು ಜನ! ಹತ್ತು ದಿನ! ( ಪ್ರವಾಸ ೫ ರಿಂದ ೭ ದಿನಗಳದ್ದು ಎಂದು ತೀರ್ಮಾನವಾಗಿತ್ತು) ಆದರೆ ಸ್ಥಳಗಳಲ್ಲಿ ಸ್ವಲ್ಪ ಬದಲಾವಣೆ. ಅದರ ವಿವರಣೆ ಮುಂದೆ ಇದೆ...



ಅದೊಂದು ಅದ್ಭುತ ಅನುಭವ! ಹೌದು ರೈಲು ಗಾಡಿಯು ಮಂಗಳೂರನ್ನು ಬಿಟ್ಟು ಹೊರಟ ಕ್ಷಣ ಈಗಲೂ ಕಣ್ಣಿಗೆ ಕಟ್ಟಿದಂತಿದೆ! ನಮ್ಮ ಮುಂದಿರುವ ಪ್ರಯಾಣದ ರೋಚಕತೆಯು ಹೇಗಿರ ಬಹುದು ಎನ್ನುವುದರ ಕಲ್ಪನೆಯಲ್ಲೇ ಸಾಗಿದ ಮನಸ್ಸು, ದಾರಿಯ ನಡುವೆ ನಮ್ಮೆದುರು ತೆರೆದು ಕೊಂಡ ಲೋಕವನ್ನು ಬೆರಗು ಕಣ್ಣುಗಳಿಂದಲೇ ಸ್ವಾಗತಿಸುತ್ತಿತ್ತು, ಆನಂದಿಸುತ್ತಿತ್ತು.

ಮೊದಲ ದಿನದ ಪ್ರಯಾಣ ಸುಖವಾಗಿ ಸಾಗಿ ತನ್ನ ಗಮ್ಯ ಸೇರುವಲ್ಲಿ ಯಶಸ್ವಿಯಾಗಿತ್ತು. ಬೆಂಗಳೂರು! ಸಮಯ ರಾತ್ರಿ ೭:೩೦, ಹೇಳಿ ಕೊಳ್ಳುವಂತಹ ಚಳಿ ಏನೂ ಇರದಿದ್ದರೂ ಸ್ವಲ್ಪ ಚುಮು ಚುಮು ಚಳಿ ಗಾಳಿಯು ತನ್ನ ಇರವನ್ನು ಸಮರ್ಥಿಸಿ ಕೊಳ್ಳುತ್ತಲೇ ಇತ್ತು!

ಈಗ ರವಿಯನ್ನು ಹುಡುಕಬೇಕು! ಹೌದು ನಮ್ಮ ಬರುವಿಕೆಯನ್ನು ಸಂಶಯಾಸ್ಪದವಾಗಿ ಕಾಯುತ್ತಿದ್ದ ನಮ್ಮ ಸ್ನೇಹಿತ "ರವಿ". ಮೊಬೈಲ್ ಕರೆ ಸ್ವೀಕರಿಸಿದ ನಂತರವೇ ನಾವು ಬಂದಿರುವುದನ್ನು ಖಚಿತ ಪಡಿಸಿಕೊಂಡು ತನ್ನ ಮನೆಗೆ ಬರುವ ಹಾದಿ ಹೇಗೆ ಎಂದು ಹೇಳಿ ಕೊಟ್ಟ.

ಕೋರಮಂಗಲ ಇಲ್ಲಿ ಫೋರಂ ಅನ್ನೋ ಶಾಪಿಂಗ್ ಮಾಲ್ ನ ಎದುರು ಕಾಯುವಂತೆ ನಮಗೆ ನಿರ್ದೇಶಿಸಿದ ಆಸಾಮಿ ಕೊನೆಗೂ ಎದುರು ಪ್ರತ್ಯಕ್ಷನಾದ. ಅಲ್ಲಿಂದ ೨ ಕಿಲೋ ಮೀಟರ್ ನಡೆದುಕೊಂಡು ಮನೆ ಸೇರಿದೆವು. ಅರುಣ್ ಗೆ ಅಲ್ಲೊಂದು ಆಶ್ಚರ್ಯ ಕಾದಿತ್ತು, ರವಿ ಜೊತೆ ಅರುಣ್ ನ ಹಳೆಯ ಗೆಳೆಯ ನಿತೇಶ್ ಕೂಡ ಇದ್ದ. ಬಹಳ ಸಂತೋಷದಿಂದ ಇಬ್ಬರೂ ಹಳೆಯ ನೆನಪುಗಳನ್ನು ಕೆದಕಿ ಖುಷಿ ಪಟ್ಟರು. ಅದೇ ಮನೆಯ ಹತ್ತಿರ ಅರುಣ್ ನ ಇನ್ನೊಬ್ಬ ಹಳೆಯ ಖಾಸಾ ಗೆಳೆಯ ಶಿವಲಾಲ್ ಕೂಡ ವಾಸವಾಗಿರುವುದು ಗೊತ್ತಿದ್ದ ಕಾರಣ ಅವನನ್ನೂ ನೋಡಿ ಬರಲೆಂದು ಅಲ್ಲಿಗೆ ಹೆಜ್ಜೆ ಹಾಕಿದನು! ಆ ರಾತ್ರಿ ಆರೂ ಜನ ಸೇರಿ ಕೊಂಡು ಭರ್ಜರಿ ಭೋಜನ ಮಾಡಿ, ಹಳೆಯ ಸ್ನೇಹಿತರನ್ನು ನೆನೆಸಿಕೊಂಡು, ಕೆಲವರಿಗೆ ಫೋನ್ ಮಾಡಿ ಕಾಟ ಕೊಟ್ಟು, ಹಾಗೂ ಹೀಗೂ ನಿದ್ದೆಗೆ ಜಾರಿದರು.




ಪಯಣ ಮುಂದುವರೆಸುತ್ತ ಚಿತ್ರದುರ್ಗಕ್ಕೆ...............